Monday 16 April 2012

ಅಂತ:ಕರಣ


ಯೋಜನೆಗಳು ನೂರಾರು ರೂಪುರೇಷೆಗೊಳ್ಳುತ್ತಿದ್ದವು
ನನ್ನೀ ಅಂತರ್ಪಟಲದಲ್ಲಿ ಭವಿಷ್ಯದ ಬಗ್ಗೆ
ನಿನ್ನೆ ಇಂದು ನಾಳೆಗಳ ಸಂಧಾನದಲ್ಲಿ
ಮನೆ ಖರೀದಿಸಲಾ ಮದುವೆಯಾಗಲಾ
ಎಂಬ ತುಮುತುಮು ತಳಮಳ

ಮನದಲ್ಲಿ ಏನಂದುಕೊಳ್ಳುತ್ತೀಯೋ ಅದನ್ನು ಇಂದೇ ಮಾಡಿ ಮುಗಿಸು ಅನ್ನುವ ಹಿರಿಯರು
ಅದು ಸಾಧ್ಯವಾ ಅದನ್ನು ಹೇಗೆ ಸಾಧಿಸಲಿ ಎಂದು ಚಿಂತಿಸುವ ಕಿರಿಯರು

ಹುಚ್ಚುಗುದುರೆಯಂತೆ ಮನವೆಲ್ಲೆಲ್ಲೋ ಓಡುತಿದೆ
ಈ ಕಾಂಪಿಟೀಷನ್ ವರ್ಡ್ಲ್ ನಲ್ಲಿ ಬದುಕುವುದು ಹೇಗೆ?
ಓ! ದೇವರೇ ಯೋಗ, ಡೋಗ, ಮೌನವ್ರತ ಎಲ್ಲಾ ಸಾಧಿಸಲು ಹೆಣಗುತ್ತಿರುವ ನಾನು
ದಯವಿಟ್ಟು ಒಂದು ಚೂರು ಮನ:ಶಾಂತಿ ಕೊಡು ಗುರುವೇ

                    -ಶಿಲ್ಪ ಶಾಸ್ತ್ರಿ

No comments:

Post a Comment