Monday 16 April 2012

ನಿವೇದನೆ


ಗುರುದಕ್ಷಿಣೆ ನೀಡಲು ಹಾರಿತು ನದಿಯ ಬುಡಕ್ಕೆ ಗುಬ್ಬಿ
ಎತ್ತ ನೋಡಲ್ಲಿ ಬರೇ ಮಣ್ಣು ಕಲ್ಲು ನೆಲ
ಹಿಂದೊಮ್ಮೆ ಮೈದುಂಬಿ ಹಾಲ್ನೊರೆಯಂತೆ ಹರಿಯುತ್ತಿದ್ದ ನದಿ
ಈಗ ಎಲ್ಲೆಂದರಲ್ಲಿ ಕಾಂಗ್ರೆಸ್ಸ್ ಕಳ್ಳಿಯಂತೆ ಹಬ್ಬಿದ ಕಟ್ಟಡಗಳು ಮುಟ್ಟುತ್ತಿವೆ ಮುಗಿಲ

ಆಗಿದೆ ವಾತವರಣದಲ್ಲಿ ಏರುಪೇರು
ಹರಿದಿದೆ ಓಝೋನ್ ಪದರು ಚೂರುಚೂರು
ಅಯ್ಯೋ ದೇವರೆ! ಇದೆಂತ ದುರ್ಗತಿ ಎಂದು ಕಣ್ಣು ಕೆಂಪಾಯಿತು
ತನ್ನ ಅಣ್ಣ ತಮ್ಮಂದಿರನ್ನ ಬೇರ್ಪಡಿಸಿದರಲ್ಲ ಈ ರಾಕ್ಷಸರು ಎಂದು ಹಿಡಿಶಾಪ ಹಾಕಿತು

ಮೆಲುಕು ಹಾಕಿತು, ಸೀಟಿ ಹೊಡೆಯುತ್ತ ಆಟವಾಡುತ್ತಿದ್ದ ದಿನವನ್ನ
ಕೇಳುತ್ತ ನದಿಯ ಜುಳುಜುಳು ಮಂಜುಳ ನಾದ
ಪ್ರಶ್ನೆ ಎದ್ದಿತು ಗುಬ್ಬಿಯ ಮನದಲ್ಲಿ
ಮೂಳೆ ಮಾಂಸದ ತೊಡಿಕೆಯ ಮಾನವನೇಕೆ ದಾನವನಾದ

ಬರಡು ಭೂಮಿ ಬಂಜೆತನದ ಕುರುಹು
ನದಿ ನೀರಾಗಿದೆ ರಕುತದಂತೆ ಕೆಂಪು
ಮದ ಮತ್ಸರ ಕೊಲೆ ಸುಲಿಗೆ ದರೋಡೆ
ಮರೆತಾಗಿದೆ ಗೋಧೂಳಿಯ ಕಂಪು

ಗುಬ್ಬಿ ಮೇಲೆಕೆ ಬ್ರಹ್ಮಾಸ್ತ್ರ
ಬನ್ನಿ ಆತ್ಮಾನ್ವೇಷಣೆ ಮಾಡೋಣ
ಶುದ್ಧ ಪರಿಸರ, ಆರೋಗ್ಯಭರಿತ ಜೀವನ
ಸಮಯ ಪ್ರಜ್ನೆಯಿಂದ ನಲ್ಮೆಯ ಬಾಳುವೆ ನಡೆಸೋಣ

                    -ಶಿಲ್ಪ ಶಾಸ್ತ್ರಿ


No comments:

Post a Comment